Sunday, February 28, 2010
Saturday, February 27, 2010
ಬಂದು ಬಿಡು ಇನ್ನೊಮ್ಮೆ
ಸಾಕು ಮಾಡು ನಿನ್ನಯ ರುದ್ರ ನರ್ತನವ
ಜನ-ಜಾನುವಾರುಗಳೆಲ್ಲ ಅನಾಥವಾಗಿದೆ.
ಬಿತ್ತಿದ ಬೆಳೆ ನಾಶವಾಗಿದೆ,
ಕಟ್ಟಿದ ಸೂರು ಹಾಳಾಗಿದೆ,
ಕನಸುಗಳನ್ನೆಲ್ಲ ಪ್ರವಾಹ ಕೊಚ್ಚಿ ಕೊಂಡೊಯ್ದಿದೆ,
ಮುಂದೇನು ಎಂಬ ಚಿಂತೆ ಕಾಡಿದೆ!
ಇದ್ದೊಬ್ಬನಾಸರೆ ಕಳೆದುಕೊಂಡಿದ್ದೇನೆ,
ಮನೆ-ಮನ ಬೆಳಗುವವ ಇಲ್ಲೇ ಎಲ್ಲೋ
ಆಟವಾಡಿಕೊಂಡಿದ್ದವ ಕಾಣುತ್ತಿಲ್ಲ
ಜೊತೆಯಲ್ಲೇ ಇರುತ್ತೇನೆ ಎಂದವಳು
xxxxxxxxxxxxxxxxxxxxxxxxಹೇಳದೇ ಎತ್ತಲೋ ಹೋಗಿದ್ದಾಳೆ
xxxxxxxxxxxxxxxxxxxxxxxxಮನಸು ಕಂಗಾಲಾಗಿದೆ.
xxxxxxxxxxxxxxxxxxxxxxxxಬಂದು ಬಿಡು ಇನ್ನೊಮ್ಮೆ ಬಿಟ್ಟಿರಲಾರೆ ಅವರನ್ನು,
xxxxxxxxxxxxxxxxxxxxxxxxಬದುಕಿರಲಾರೆ ಅವರಿಲ್ಲದೆ ಬಂದು ಬಿಡು ಇನ್ನೊಮ್ಮೆ
ನಿರೀಕ್ಷೆ
ಬರುತ್ತೀನೆಂದು ಹೇಳಿದ್ದಿಯಲ್ಲ ನೀ ಕನಸಿಗೆ ಮನಸಿಗೆ,
ಕಾದೆ ನಾ ಹಗಲಿರುಳು ನೀ ಬರಲಿಲ್ಲ ಏಕೆ?
ಹುಣ್ಣಿಮೆ ಚಂದಿರನ ನೋಡುತ್ತಾ ಬೆಳಕಾಗಿದ್ದೇ ಗೊತ್ತಾಗಲಿಲ್ಲ.
ಹೌದಲ್ಲವೇ? ಗೆಳತಿ ನೀ ಹೇಳಿದ್ದು ಕನಸಿಗೆ ಎಂದಲ್ಲವೇ?
ಮಲಗದೇ ನೀ ಬರುವೆ ಹೇಗೆ ಅಲ್ಲವೇ?
ಮನ ದುಗುಡಗೊಂಡಿದೆ! ನೀ ಬಂದಾಗ ನಾ ಸವಿನಿದ್ದೆಯಲ್ಲಿದ್ದರೆ?
ತೊಂದರೆ ಕೊಡಬಾರದೆಂದು ನೀ ಹಾಗೆ ಹೊರಟು ಹೋದರೆ?
ಅಲ್ಲವೇ ಸಖಿ, ಮಲಗದೇ ಕಾದೆ ನಾ ನಿನ್ನ ಬರುವಿಕೆಗೆ
ಹಗಲಿನಲಿ ಬರಲಿಲ್ಲ ಇರುಳಿನಲಿ ಕಾಣಲಿಲ್ಲ
ಮತ್ತೆ ಯಾವಾಗ ಬರುವೆ ಹೇಳು ಸಖಿ.
ಬರುತ್ತೀನೆಂದು ಹೇಳಿದ್ದಿಯಲ್ಲ ನೀ ಕನಸಿಗೆ ಮನಸಿಗೆ,
ಕಾದೆ ನಾ ಹಗಲಿರುಳು ನೀ ಬರಲಿಲ್ಲ ಏಕೆ?
ಹುಣ್ಣಿಮೆ ಚಂದಿರನ ನೋಡುತ್ತಾ ಬೆಳಕಾಗಿದ್ದೇ ಗೊತ್ತಾಗಲಿಲ್ಲ.
ಹೌದಲ್ಲವೇ? ಗೆಳತಿ ನೀ ಹೇಳಿದ್ದು ಕನಸಿಗೆ ಎಂದಲ್ಲವೇ?
ಮಲಗದೇ ನೀ ಬರುವೆ ಹೇಗೆ ಅಲ್ಲವೇ?
ಮನ ದುಗುಡಗೊಂಡಿದೆ! ನೀ ಬಂದಾಗ ನಾ ಸವಿನಿದ್ದೆಯಲ್ಲಿದ್ದರೆ?
ತೊಂದರೆ ಕೊಡಬಾರದೆಂದು ನೀ ಹಾಗೆ ಹೊರಟು ಹೋದರೆ?
ಅಲ್ಲವೇ ಸಖಿ, ಮಲಗದೇ ಕಾದೆ ನಾ ನಿನ್ನ ಬರುವಿಕೆಗೆ
ಹಗಲಿನಲಿ ಬರಲಿಲ್ಲ ಇರುಳಿನಲಿ ಕಾಣಲಿಲ್ಲ
ಮತ್ತೆ ಯಾವಾಗ ಬರುವೆ ಹೇಳು ಸಖಿ.
Sunday, February 7, 2010
Subscribe to:
Posts (Atom)