Saturday, February 27, 2010


ಬಂದು ಬಿಡು ಇನ್ನೊಮ್ಮೆ

ಸಾಕು ಮಾಡು ನಿನ್ನಯ ರುದ್ರ ನರ್ತನವ
ಜನ-ಜಾನುವಾರುಗಳೆಲ್ಲ ಅನಾಥವಾಗಿದೆ.
ಬಿತ್ತಿದ ಬೆಳೆ ನಾಶವಾಗಿದೆ,
ಕಟ್ಟಿದ ಸೂರು ಹಾಳಾಗಿದೆ,
ಕನಸುಗಳನ್ನೆಲ್ಲ ಪ್ರವಾಹ ಕೊಚ್ಚಿ ಕೊಂಡೊಯ್ದಿದೆ,
ಮುಂದೇನು ಎಂಬ ಚಿಂತೆ ಕಾಡಿದೆ!

ಇದ್ದೊಬ್ಬನಾಸರೆ ಕಳೆದುಕೊಂಡಿದ್ದೇನೆ,
ಮನೆ-ಮನ ಬೆಳಗುವವ ಇಲ್ಲೇ ಎಲ್ಲೋ
ಆಟವಾಡಿಕೊಂಡಿದ್ದವ ಕಾಣುತ್ತಿಲ್ಲ
ಜೊತೆಯಲ್ಲೇ ಇರುತ್ತೇನೆ ಎಂದವಳು
xxxxxxxxxxxxxxxxxxxxxxxxಹೇಳದೇ ಎತ್ತಲೋ ಹೋಗಿದ್ದಾಳೆ
xxxxxxxxxxxxxxxxxxxxxxxxಮನಸು ಕಂಗಾಲಾಗಿದೆ.
xxxxxxxxxxxxxxxxxxxxxxxxಬಂದು ಬಿಡು ಇನ್ನೊಮ್ಮೆ ಬಿಟ್ಟಿರಲಾರೆ ಅವರನ್ನು,
xxxxxxxxxxxxxxxxxxxxxxxxಬದುಕಿರಲಾರೆ ಅವರಿಲ್ಲದೆ ಬಂದು ಬಿಡು ಇನ್ನೊಮ್ಮೆ

No comments:

Post a Comment